ಪ್ರವಾಸದಿಂದ ಮನರಂಜನೆ, ಗಮನಿಸುವಿಕೆ, ಕಲಿಕೆ, ಆತ್ಮವಿಶ್ವಾಸ ಮತ್ತು ಜವಾಭ್ದಾರಿ ಬೆಳಯುವಂತೆ ಯೋಜಿಸಲಾಗುತ್ತದೆ. ಮೈಸೂರಿನ ಸುತ್ತಮುತ್ತಲಿನ ಅಪರೂಪದ ಕೆರೆಗಳು, ಪಕ್ಷಿಧಾಮಗಳು, ಸಂಗ್ರಹಾಲಯಗಳು, ಬೆಟ್ಟಗಳು,ಕಛೇರಿಗಳು (ಬ್ಯಾಂಕ್, ಅಂಚೆಕಚೇರಿ, ಪೋಲಿಸ್ ಟಾನೆ) ಆಸ್ಪತ್ರೆ, ಐತಿಹಾಸಿಕ ಕಟ್ಟಡ, ಜಾತ್ರೆ, ಸ್ಮಾರಕಗಳಿಗೆ ಪ್ರವಾಸ/ಭೇಟಿ ಆಯೋಜಿಸಲಾಗುತ್ತದೆ. ಹಾಗೆಯೇ ವರ್ಷಕ್ಕೆ ೨ ಸಾರಿ ಮೈಸೂರಿನ ಹೊರಗಿನ ಪಾರಂಪರಿಕ, ನೈಸರ್ಗಿಕ ಸ್ಥಳಗಳಿಗೆ ಕಾಡು, ಬೆಟ್ಟ, ಕವಿ ಮನೆಗಳಿಗೆ ಪ್ರವಾಸ ಏರ್ಪಾಡು ಮಾಡಲಾಗುತ್ತದೆ. ಹೋಗುವ ಮೊದಲು ಮಕ್ಕಳಿಗೆ ಆಯಾ ಸ್ಥಳಗಳ ಬಗ್ಗೆ ಸಮಗ್ರ ಮಾಹಿತಿ, ಮಾರ್ಗದ ನಕ್ಷೆಗಳ ಪರಿಚಯ-ಅಧ್ಯಯನ ಮಾಡಿಸಲಾಗಿರುತ್ತದೆ.
(ಮೈಸೂರಿನ ಪಾರಂಪರಿಕ ಕಟ್ಟಡಗಳು, ನೀರು ಸರಬರಾಜು ಮಂಡಳಿ, ಅಗ್ನಿಶಾಮಕ ದಳ, ಕುಪ್ಪಳ್ಳಿ, ದ ರಾ ಬೇಂದ್ರೆಯವರ ಮನೆ ಇತ್ಯಾದಿಗಳಿಗೆ ೨೦೧೧ ರಲ್ಲಿ ಭೇಟಿಕೊಡಲಾಯಿತು)